ಯಾವ ಯಾವ ಮರಗಳಲ್ಲಿ, ಎಲೆಗಳಲ್ಲಿ ಯಾವ ಯಾವ ದೇವರು ವಾಸಿಸುತ್ತಾರೆ ಮತ್ತು ದೈವಿಕ ವಿಷಯಗಳು ಹಾಗೂ ಔಷಧೀಯ ಗುಣಗಳು  

ಪ್ರಪಂಚದ ಅನೇಕ ಪುರಾಣಗಳಲ್ಲಿ ಮರಗಳು ಗಮನಾರ್ಹವಾಗಿವೆ ಮತ್ತು ಅವುಗಳಿಗೆ ಯುಗಯುಗಾಂತರಗಳಲ್ಲಿ ಆಳವಾದ ಮತ್ತು ಪವಿತ್ರ ಅರ್ಥಗಳನ್ನು ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಪ್ರಾಣಿಗಳಿಗೆ, ಪಕ್ಷಿಗಳಿಗೆ ಹೇಗೆ ದೈವಿಕ ಸ್ಥಾನವನ್ನು ನೀಡಿದ್ದಾರೋ ಹಾಗೇ ಕೆಲವೊಂದು ಗಿಡ, ಮರಗಳಿಗೂ ದೈವಿಕ ಸ್ಥಾನವನ್ನು ನೀಡಿದ್ದಾರೆ. ಹಲವಾರು ಮರಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಹೆಚ್ಚಾಗಿ ದೇವತೆಗಳೊಂದಿಗೆ ಸಂಬಂಧ ಹೊಂದಿವೆ. ಕೆಲವು ಮರಗಳು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಅಂತಹ ಕೆಲವು ಮರಗಳ ಮತ್ತು ಎಲೆಗಳ ಬಗ್ಗೆ ತಿಳಿಯೋಣ ಬನ್ನಿ.

ವೈಜ್ಞಾನಿಕ ವಿಷಯ:

ಮರಗಳಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲಾಗುವುದಿಲ್ಲ, ಮರಗಳು ಭೂಮಿಯ ಮೇಲಿನ ಅತ್ಯಂತ ಅಗತ್ಯವಾದ ಜೀವಿಗಳಲ್ಲಿ ಒಂದಾಗಿದೆ. ಜೀವಿಗಳು ಉಸಿರಾಡುವ ಗಾಳಿಯನ್ನು ಸ್ವಚ್ಛಗೊಳಿಸಲು ಅವರು ನಿರಂತರವಾಗಿ ಕೆಲಸ ಮಾಡುತ್ತಾರೆ.

ಅಗ್ನಿಯ ಬೆಂಕಿಯು ಜೀವಕ್ಕೆ ಇಂಧನ ನೀಡುವಂತೆಯೇ ಸೂರ್ಯನ ಬೆಳಕನ್ನು ಶಕ್ತಿಯಾಗಿ ಪರಿವರ್ತಿಸುವುದು, ನೀರನ್ನು ಹೀರಿಕೊಳ್ಳುವುದು ಮತ್ತು ಬಿಡುಗಡೆ ಮಾಡುವುದು, ಕಾರ್ಬನ್-ಡೈ-ಆಕ್ಸೈಡನ್ನು ಹೀರಿಕೊಳ್ಳುವುದು ಮತ್ತು ಆಮ್ಲಜನಕ ಬಿಡುಗಡೆ ಮಾಡುವುದು. ಆಯುರ್ವೇದ ಔಷಧಗಳಿಗೆ ಇವುಗಳ ಕೊಡುಗೆ ಅಪಾರವಾಗಿದ್ದು, ಮರದ ಎಲೆ, ಹೂ, ಕಾಯಿ, ಹಣ್ಣು, ಬೇರು, ಕಾಂಡ, ತೊಗಟೆ ಎಲ್ಲಾವು ಹಲವಾರು ಔಷದ ಗುಣಗಳನ್ನು ಹೊಂದಿವೆ.

ಅಶ್ವತ್ಥ ವೃಕ್ಷ (ಅರಳಿ ಮರ) – ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು , ಶಿವ)

ಅಶ್ವತ್ಥ ವೃಕ್ಷ (ಅರಳಿ ಮರ) – Sacred Fig / Peepal Tree (Ficus religiosa)

“ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ” ಅಂದರೆ ಬ್ರಹ್ಮ (ಬೇರುಗಳು), ವಿಷ್ಣು (ಕಾಂಡ) ಮತ್ತು ಶಿವ (ಎಲೆಗಳು) ನೊಂದಿಗೆ ನೆಲೆಸಿದ್ದಾರೆ ಎಂದರ್ಥ, ಅರಳಿ ಮರವನ್ನು ಭೋದಿವೃಕ್ಷ, ಪೀಪಲ್, ಅಶ್ವತ್ಥ ವೃಕ್ಷ ಮುಂತಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿದೆ. ಹಳ್ಳಿಗಳ ಅಶ್ವತ್ಥ ಕಟ್ಟೆಯಲ್ಲಿ ಬೆಳೆದ ಪವಿತ್ರ ಪೂಜಾ ವೃಕ್ಷ. ಈ ವೃಕ್ಷಕ್ಕೆ ನೀರು ಎರೇದು ಪ್ರಾದಕ್ಷಿಣೆ ಮಾಡುವುದು ರೂಡಿಯಲ್ಲಿದೆ. ಪ್ರಾದಕ್ಷಿಣೆ ಮಾಡುವುದರಿಂದ ದೋಷಗಳು ಪರಿಹರಿಸುತ್ತವೆ ಮತ್ತು ಬೇಡಿಕೆಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಈ ಮರದ ಕೆಳಗೆ ಕುಳಿತು ಧ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂಬುದು ಪ್ರತೀತಿ.

ಔಷಧೀಯ ಗುಣಗಳು:

ಅರಳಿ ಮರವು ವಿವಿಧ ಔಷಧೀಯ ಉಪಯೋಗಗಳನ್ನು ಹೊಂದಿದೆ. ಇದರ ಎಲೆಗಳು, ತೊಗಟೆ ಮತ್ತು ಹಣ್ಣುಗಳನ್ನು ಜೀರ್ಣಕಾರಿ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು, ಚರ್ಮದ ಸಮಸ್ಯೆಗಳು ಒಳಗೊಂಡಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅರಳಿ ಎಲೆಗಳನ್ನು ಮಲಬದ್ಧತೆ, ಅತಿಸಾರ ಮತ್ತು ಇತರ ಜಠರಗರುಳಿನ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಎಲೆಗಳ ರಸವು ವಾಕರಿಕೆ ನಿವಾರಿಸಲು ಮತ್ತು ಜೀರ್ಣಾಂಗವ್ಯೂಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಆಸ್ತಮಾ, ಕೆಮ್ಮು ಮತ್ತು ಬ್ರಾಂಕೈಟಿಸ್ ಚಿಕಿತ್ಸೆಗೆ ಬಳಸಲಾಗುತ್ತದೆ. ಮರದ ಸಾರಗಳನ್ನು ಎಸ್ಜಿಮಾ, ಗಾಯಗಳು ಮತ್ತು ಚರ್ಮ ರೋಗಗಳಿಗೆ ಸಾಂಪ್ರದಾಯಿಕ ಪರಿಹಾರಗಳಲ್ಲಿ ಬಳಸಲಾಗುತ್ತದೆ. ಎಲೆಗಳನ್ನು ಬಿರುಕು ಬಿಟ್ಟ ಹಿಮ್ಮಡಿ ಮತ್ತು ತುರಿಕೆಯನ್ನು ಶಮನಗೊಳಿಸಲು ಸಹ ಬಳಸಬಹುದು. ಮರದ ಬೀಜಗಳನ್ನು ರಕ್ತವನ್ನು ಶುದ್ಧೀಕರಿಸಲು ಬಳಸಲಾಗುತ್ತದೆ. ಮರದ ತೊಗಟೆ ಕಿವಿ ನೋವಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಮರದ ಹೊಸ ಬೇರುಗಳನ್ನು ಹಲ್ಲುನೋವಿನಿಂದ ಪರಿಹಾರ ನೀಡಲು ಬಳಸಬಹುದು.

ಎಕ್ಕದ ಎಲೆ – ಸೂರ್ಯ

ಎಕ್ಕದ ಗಿಡ – Castor Plant (Ricinus communis)

ಎಕ್ಕದ ಎಲೆಯಲ್ಲಿ ಸೂರ್ಯ ದೇವರು ನೆಲೆಸಿರುತ್ತಾರೆ. ಹಿಂದೂ ಪುರಾಣದ ಪ್ರಕಾರ, ಎಕ್ಕದ ಎಲೆಯನ್ನು ಸೂರ್ಯನ ವಾಸಸ್ಥಾನವೆಂದು ನಂಬಲಾಗಿದೆ, ಈ ಎಲೆಯನ್ನು ಬೆಳಕು, ಜೀವನ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಹಾಗು ಸೌರವ್ಯೂಹದೊಂದಿಗೆ ಸಂಬಂಧಿಸಿದೆ. ಸೂರ್ಯನ ಉಪಸ್ಥಿತಿಯು ನಕಾರಾತ್ಮಕ ಶಕ್ತಿಗಳು, ಮತ್ತು ಇತರ ದುಷ್ಟಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಈ ಎಲೆಯನ್ನು ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.
ರಥಸಪ್ತಮಿ ದಿನದಂದು ಎಕ್ಕದ ಎಲೆಯ ಸ್ನಾನ ಬಹಳ ವಿಶೇಷ ಹೊಂದಿದೆ. ಸಪ್ತಮಿಯಂದು ಮುಂಜಾನೆಯೇ ಎದ್ದು ಎಕ್ಕದ ಎಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ರಥಸಪ್ತಮಿಯ ದಿನದಂದು ಎಕ್ಕದ ಎಲೆಗಳನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವುದು ಹೆಚ್ಚಿನ ಮಹತ್ವ ಪಡೆದಿದೆ.

ಔಷಧೀಯ ಗುಣಗಳು:

ಎಕ್ಕದ ಎಲೆಗಳ ಬಗ್ಗೆ ಹೇಳುವುದಾದರೆ ವೈಜ್ಞಾನಿಕ ಸತ್ವಗಳನ್ನು ಹೊಂದಿದೆ. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಉರಿಯೂತ, ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದು. ಗಾಳಿ-ಶುದ್ಧೀಕರಣ ಗುಣಗಳನ್ನು ಹೊಂದಿದೆ. ನೈಸರ್ಗಿಕವಾಗಿ ಗಾಳಿ ಫಿಲ್ಟರ್ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಮತ್ತು ಎಲೆಯು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

ಆಲದ ಮರ – ಶಿವ

ಆಲದ ಮರ – Banyan Tree (Ficus benghalensis)

ಶಿವನು ಆಲದ ಮರದ ಮೇಲೆ ನೆಲೆಸಿದ್ದಾನೆ. ಆಲದ ಮರ ಅಥವಾ ಬೋಧಿ ಮರವು ಏಷ್ಯಾದ ಎರಡು ಪ್ರಮುಖ ಧರ್ಮಗಳಿಗೆ ಮತ್ತು ವಿಶೇಷವಾಗಿ ಭಾರತದಲ್ಲಿ ರಾಷ್ಟ್ರೀಯ ವೃಕ್ಷವಾಗಿದೆ. ಬೌದ್ಧಧರ್ಮ ಮತ್ತು ಹಿಂದೂ ಧರ್ಮಗಳು ವಿಭಿನ್ನ ಕಾರಣಗಳಿಗಾಗಿ ಇದನ್ನು ಪೂಜಿಸುತ್ತೆವೆ. ಈ ಮರವು ಸಾರ್ವತ್ರಿಕವಾಗಿ ಪವಿತ್ರವಾಗಿದೆ ಎಂಬುದು ಆಶ್ಚರ್ಯವೇನಿಲ್ಲ. ಪ್ರತಿ ತ್ರಯೋದಶಿಯಂದು ಆಲದ ಮರವನ್ನು ಪೂಜಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಔಷಧೀಯ ಗುಣಗಳು:

ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಆಲದ ಎಲೆಗಳು ಮತ್ತು ಬೇರುಗಳು ಚರ್ಮದ ಉರಿ, ಗುಳ್ಳೆಗಳು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಿವೆ. ಆಲದ ಬೇರನ್ನು ಜಜ್ಜಿ ಹಲ್ಲುಜ್ಜುವುದರಿಂದ ಹಲ್ಲು ನೋವು, ಒಸಡುನೋವು ಮತ್ತು ಹಲ್ಲಿನ ತೊಂದರೆಗಳನ್ನು ನಿವಾರಿಸಬಹುದು. ಆಲದ ಎಲೆಗಳು ಮತ್ತು ಬೇರುಗಳನ್ನು ಕಫ ಮತ್ತು ಕೆಮ್ಮಿಗೆ ಪರಿಹಾರವಾಗಿ ಬಳಸಬಹುದು. ಜೀರ್ಣಕ್ರಿಯೆಗೆ ಸಹಾಯಕವಾಗುದು ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗು ಆಲದ ಮರವು ತನ್ನ ನೆರಳನ್ನು ಇತರ ಮರಗಳಿಗೆ ಒದಗಿಸಿ ಅವುಗಳ ಬೆಳವಣಿಗೆಗೆ ನೆರವಾಗುತ್ತದೆ.

ಬಿಲ್ವ ಮರ – ಶಿವ

ಬಿಲ್ವ ಮರ – Bael Tree / Bengal Quince (Aegle marmelos)

ಶಿವನು ಬಿಲ್ವಪತ್ರೆ ಮರದ ಮೇಲೆ ಹಾಗು ಆಲದ ಮರದ ಮೇಲೆ ನೆಲೆಸಿದ್ದಾನೆ. ಬಿಲ್ವಪತ್ರೆಯು ಶಿವನಿಗೆ ಪ್ರಿಯಾವಾಗಿದ್ದು, ಈಶ್ವರನನ್ನು ಬಿಲ್ವಪ್ರಿಯಾ ಎಂದೇ ಕರೆಯಲಾಗುತ್ತದೆ. ಇಂತಹ ಭಗವಂತ ಶಿವನ ಆರಾಧನೆಯಲ್ಲಿ ಪ್ರತಿದಿನ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಔಷಧೀಯ ಗುಣಗಳು:

ಆಯುರ್ವೇದದಲ್ಲಿ ಬಿಲ್ವಪತ್ರೆಗೆ ಮಹತ್ವದ ಪಾತ್ರವಿದೆ. ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಚರ್ಮದ ಸಮಸ್ಯೆಗಳು, ತಲೆಕೂದಲಿನ ಸಮಸ್ಯೆಗಳು, ಕಣ್ಣಿನ ಸಮಸ್ಯೆಗಳು, ಹೊಟ್ಟೆಯ ಸಮಸ್ಯೆಗಳು, ನೋವು, ಬಾವು, ಊತ , ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವದ ಎಲೆಯ ರಸ, ಕಷಾಯಗಳ ಮೂಲಕ ಸಮಸ್ಯೆ ನಿವಾರಣೆಯಾಗುತ್ತದೆ.

ವಿಳ್ಯೆದೆಲೆ – ಲಕ್ಷ್ಮಿ ನಾರಾಯಣ

ವಿಳ್ಯೆದೆಲೆ ಬಳ್ಳಿ – Betel Leaf Vine (Piper betle)

ಹಿಂದೂ ಸಂಪ್ರದಾಯದಲ್ಲಿ, ವಿವಿಧ ದೇವತೆಗಳು ವೀಳ್ಯದ ಎಲೆಯೊಳಗೆ ವಾಸಿಸುತ್ತಾರೆ ಎಂದು ನಂಬಲಾಗಿದೆ. ವಿಳ್ಯೆದೆಲೆನ್ನು ಪ್ರತಿಯೊಂದು ಪೂಜೆಗಳಲ್ಲಿಯೂ ಬಳಸಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಶ್ರೀ ಹರಿ ವಿಷ್ಣು (ನಾರಾಯಣ) ಎಲೆಯೊಳಗೆ ವಾಸಿಸುತ್ತಾನೆ ಮತ್ತು ಶಿವ ಹೊರಭಾಗದಲ್ಲಿ ವಾಸಿಸುತ್ತಾನೆ. ಹೆಚ್ಚುವರಿಯಾಗಿ, ಲಕ್ಷ್ಮಿ ದೇವತೆ (ಜ್ಯೇಷ್ಠ ಲಕ್ಷ್ಮಿ) ಎಲೆಯ ಕಾಂಡದ ಸಂಪರ್ಕ ಬಿಂದುವಿನಲ್ಲಿ ಇರುತ್ತಾಳೆ. ಕಳಶಗಳಲ್ಲಿ ವಿಳ್ಯೆದೆಲೆನ್ನು ಇರಿಸಿ ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.
ಶ್ರೀ ಹರಿ ವಿಷ್ಣು (ನಾರಾಯಣ): ಎಲೆಯೊಳಗೆ ವಾಸಿಸುತ್ತಾನೆ ಎಂದು ನಂಬಲಾಗಿದೆ.
ಶಿವ: ಎಲೆಯ ಹೊರಭಾಗದಲ್ಲಿ ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ದೇವತೆ (ಜ್ಯೇಷ್ಠ ಲಕ್ಷ್ಮಿ): ಎಲೆ ಕಾಂಡವನ್ನು ಸೇರುವ ಭಾಗದಲ್ಲಿ ವಾಸಿಸುತ್ತಾರೆ.

ಔಷಧೀಯ ಗುಣಗಳು:

ಎಲೆಯು ಗರ್ಭಿಣಿಯರಿಗೂ ಒಳ್ಳೆಯದು ಮತ್ತು ಆಯುರ್ವೇದ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ.
ಮಧುಮೇಹ ರೋಗಿಗಳಿಗೆ ವೀಳ್ಯದೆಲೆಯ ಒಳ್ಳೆಯದು ಏಕೆಂದರೆ ಇದು ಅವರ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ವೀಳ್ಯದೆಲೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ವೀಳ್ಯದೆಲೆ ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ, ಕ್ಯಾನ್ಸರ್ ವಿರೋಧಿ ಮತ್ತು ಆಂಟಿಮ್ಯುಟಾಜೆನಿಕ್ ಸಂಯುಕ್ತಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಅಸ್ತಮಾವನ್ನು ತಡೆಗಟ್ಟಬಹುದು ಮತ್ತು ನಿಯಂತ್ರಿಸಬಹುದು. ವೀಳ್ಯದೆಲೆಯ ರಸವು ಗ್ಯಾಸ್ಟ್ರಿಕ್ ಆರೋಗ್ಯ ವ್ಯವಸ್ಥೆಗೆ ಒಳ್ಳೆಯದು. ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಖಿನ್ನತೆಯ ಸಮಸ್ಯೆಗಳಿಗೆ ವೀಳ್ಯದೆಲೆ ಸಹಾಯಕ.

ಬೆಟ್ಟದ ನೆಲ್ಲಿಕಾಯಿ ಮರ – ವಿಷ್ಣು

ಬೆಟ್ಟದ ನೆಲ್ಲಿಕಾಯಿ ಮರ – Otaheite Gooseberry / Star Gooseberry (Phyllanthus acidus)

ಬೆಟ್ಟದ ನೆಲ್ಲಿಕಾಯಿ ಮರದಲ್ಲಿ ಶ್ರೀ ಹರಿ ವಿಷ್ಣು ದೇವ ನೆಲೆಸಿರುತ್ತಾರೆ ಎನ್ನಲಾಗುತ್ತದೆ. ಏಕಾದಶಿಯಂದು ನೆಲ್ಲಿಕಾಯಿ ಮರವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿಗೆ ಸಂತೋಷವಾಗುತ್ತದೆ. ಹಿಂದೂ ಪುರಾಣಗಳಲ್ಲಿ, ನೆಲ್ಲಿಕಾಯಿ ಮರ, ವಿಶೇಷವಾಗಿ ಅದರ ಎಲೆಗಳು, ದೈವಿಕ ಆಶೀರ್ವಾದಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ಅವುಗಳ ಔಷಧೀಯ ಗುಣಗಳಿಗಾಗಿ ಪೂಜಿಸಲ್ಪಡುತ್ತವೆ. ನೆಲ್ಲಿಕಾಯಿ ಮರವು ಬ್ರಹ್ಮ ದೇವರು ವಿಷ್ಣುವಿನ ಧ್ಯಾನದ ಸಮಯದಲ್ಲಿ ಸುರಿಸಿದ ಕಣ್ಣೀರಿನಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ, ಇದು ಹಿಂದೂ ಸಂಸ್ಕೃತಿಯಲ್ಲಿ ಪವಿತ್ರ ಮತ್ತು ಪೂಜ್ಯ ಮರವಾಗಿದೆ. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ನೆಲ್ಲಿಕಾಯಿ ಮರವನ್ನು ಪೂಜಿಸುವುದನ್ನು ಒಳಗೊಂಡಿರುತ್ತದೆ.

ಔಷಧೀಯ ಗುಣಗಳು:

ಆಮ್ಲಾ ಎಲೆಗಳು ಸಾಂಪ್ರದಾಯಿಕವಾಗಿ ಆಯುರ್ವೇದದಲ್ಲಿ ಅವುಗಳ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಬೆಂಬಲಿಸುವುದು. ಅವುಗಳ ಉತ್ಕರ್ಷಣ(Oxidation) ನಿರೋಧಕ ಮತ್ತು ಉರಿಯೂತದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಆಯುರ್ವೇದದಲ್ಲಿ, ನೆಲ್ಲಿಕಾಯಿಯು ಮೂರು ದೋಷಗಳನ್ನು (ವಾತ, ಪಿತ್ತ ಮತ್ತು ಕಫ) ಸಮತೋಲನಗೊಳಿಸುತ್ತದೆ ಎಂದು ನಂಬಲಾಗಿದೆ.


ಬೆಟ್ಟದ ನೆಲ್ಲಿಕಾಯಿ (ಆಮ್ಲಾ)ದಲ್ಲಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್-ಸಿ, ಆ್ಯಂಟಿ-ಆಕ್ಸಿಡೆಂಟ್‌ಗಳು, ಫೈಟೊಕೆಮಿಕಲ್‌ಗಳು, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದೆ. ಮಧುಮೇಹವನ್ನು ನಿರ್ವಹಿಸುವುದು ನೆಲ್ಲಿಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ನೆಲ್ಲಿಕಾಯಿ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

ಔದಂಬರ ವೃಕ್ಷ (ಅತ್ತಿಮರ) – ದತ್ತಾತ್ರೇಯ ಗುರುಗಳು

ಔದಂಬರ ವೃಕ್ಷ (ಅತ್ತಿಮರ) – Cluster Fig Tree (Ficus racemosa)

ಔದಂಬರ ವೃಕ್ಷ ಅಂದರೆ ಅತ್ತಿಮರ. ಇದು ಬಹಳ ಪೂಜ್ಯನೀಯವಾದ ಮರವಾಗಿದ್ದು. ಗುರುಪಾದವನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ವೃಕ್ಷ ದತ್ತಾತ್ರೇಯರ ವಾಸಸ್ಥಾನವಾಗಿದೆ. ವೇದಗಳ ಕಾಲದಿಂದಲೂ ಬಳಕೆಯಲ್ಲಿರುವ ಅತ್ಯದ್ಭುತವಾದ ಮರ ಈ ಔದಂಬರ ವೃಕ್ಷ. ಇಂತಹ ಪೂಜ್ಯನೀಯವಾದ ಔದಂಬರ ವೃಕ್ಷವನ್ನು ಮದುವೆ, ಗೃಹಪ್ರವೇಶ, ಇನ್ನೂ ಹಲವಾರು ಶುಭ ಸಮಾರಂಭಗಳಲ್ಲಿ (ಹತ್ತಿ ಮರ)ದ ಕೊಂಬೆಯನ್ನು ಮನೆಯ ಮುಂದೆ ನೆಟ್ಟು ಪೂಜಿಸುವುದರ ಮೂಲಕ ಪಾರಂಭಿಸುವುದು ರೂಡಿಯಲ್ಲಿದೆ.
ಅತ್ತಿಮರದ ಹೂಗಳ ಕುರಿತಾಗಿ ಪೌರಾಣಿಕ ಹಿನ್ನೆಲೆ ಕೂಡ ಇದೆ. ಹತ್ತಿ ವೃಕ್ಷದಲ್ಲಿ ಹೂವು ಯಾರಿಗೂ ಕಾಣಿಸಲ್ಲ ಒಂದು ವೇಳೆ ಅತ್ತಿ ಮರದ ಹೂವು ಕಂಡು ನೋಡಿದವರು ಪುಣ್ಯವಂತರು ಎನ್ನಲಾಗುತ್ತದೆ ಯಾಕೆಂದರೆ, ಇದು ಕುಬೇರನ ಹೂವಗಿದ್ದು. ಈ ಹೂವು ರಾತ್ರಿ ಸಮಯದಲ್ಲಿ ಅರಳಿ ತಕ್ಷಣ ಅದು ಸ್ವರ್ಗ ಲೋಕಕ್ಕೆ ಹೋಗುತ್ತದೆ ಎಂಬ ಉಲ್ಲೇಖವಿದೆ.

ಭಗವಂತನ ಹಾಲಾಹಲವನ್ನೇ ಶಮನ ಮಾಡಿದ ಈ ಮರ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ರಾಮಬಾಣದಂತಿರುವುದು, ಈ ಮರದ ಎಲೆ, ಬೇರು, ತೊಗಟೆ, ಹಣ್ಣು ಎಲ್ಲವೂ ಔಷಧಿಯುಕ್ತವಾಗಿದೆ.

ದಂತ ಕಥೆ: ಹಿರಣ್ಯ ಕಶ್ಯಪುವನ್ನು ಸಂಹರಿಸಲು ಹೊಟ್ಟೆಯನ್ನು ಬಗೆದು ಸಂಹಾರ ಮಾಡುವಾಗ ಹಿರಣ್ಯಕಶ್ಯಪುವಿನ ಹೊಟ್ಟೆಯೊಳಗೆ ಕಾಲ ಕೂಟ ಎಂಬ ಭಯಂಕರ ವಿಷವಿದ್ದು, ಆ ವಿಷ ಭಗವಂತನ ಉಗುರುಗಳ ಒಳಗೆ ಸೇರಿಕೊಂಡು ಭಗವಂತನಿಗೆ ತುಂಬಾ ಉರಿಯಾಗುತ್ತದೆ. ಏನು ಮಾಡಿದರೂ ಭಗವಂತನ ಉರಿ ಕಡಿಮೆಯಾಗುವುದಿಲ್ಲ. ಇದನ್ನು ನೋಡಿದ ಮಹಾಲಕ್ಷ್ಮಿ ದೇವಿಯು ಅತ್ತಿ ಮರದ ಹಣ್ಣುಗಳನ್ನು ಭಗವಂತನ ಉಗುರುಗಳಿಗೆ ಲೇಪಿಸುತ್ತಾಳೆ ಮತ್ತು ಹಣ್ಣುಗಳನ್ನು ತಿನ್ನಲು ಕೊಡುತ್ತಾಳೆ. ಇದರಿಂದ ಸ್ವಲ್ಪ ಹೊತ್ತಿಗೆ ಭಗವಂತನ ಉರಿ ತಾಪ ಕಡಿಮೆಯಾಗಿ ಭಗವಂತನಗೆ ಸಮಾಧಾನವಾಗುತ್ತದೆ. ಈ ರೀತಿ ಭಗವಂತನಿಗಾದ ವಿಷದ ಉರಿಯನ್ನು ಕಡಿಮೆ ಮಾಡಿದ ಔದಂಬರ ವೃಕ್ಷಕ್ಕೆ ಸಂತುಷ್ಟನಾದ ಭಗವಂತನು, ತನ್ನ ಉಗುರಿನ ನೋವನ್ನು ಕಡಿಮೆ ಮಾಡಿದ ವೃಕ್ಷವನ್ನು ಆಶೀರ್ವದಿಸಿ ವರಗಳನ್ನು ಕೊಡುತ್ತಾನೆ. ಔದುಂಬರ ವೃಕ್ಷವು ಸದಾಕಾಲ ಫಲಭರಿತ ವಾಗಿರಲಿ ಸ್ವರ್ಗ ಲೋಕದಲ್ಲಿನ ವೃಕ್ಷಗಳಂತೆಯೇ ಎಂದು ವರನೀಡುವುದರ ಜೊತೆಗೆ ಈ ಔದಂಬರ ವೃಕ್ಷವನ್ನು ದರ್ಶನ ಮಾಡಿದವರ ಸಕಲ ಪಾಪಗಳು ಕಳೆಯಲಿ. ಈ ವೃಕ್ಷವನ್ನು ಯಾರು ಭಕ್ತಿಯಿಂದ ಆರಾಧಿಸಿ ಪೂಜಿಸುತ್ತಾರೋ ಅವರ ಇಷ್ಟಾರ್ಥಗಳೆಲ್ಲ ನೆರವೇರಲಿ. ಅವರ ಮನೆಯಲ್ಲಿ ಶಾಂತಿ ಸುಖ ಸಮೃದ್ಧಿ ನೆಲೆಸಲಿ ಎಂದು ಆಶೀರ್ವಚನ ನೀಡುತ್ತಾರೆ. ಈ ಮರ ದತ್ತಾತ್ರೇಯ ಗುರುಗಳ ಪವಿತ್ರ ವಾಸಸ್ಥಾನವಾಗಿದ್ದು ಅವರ ತತ್ವಗಳು ಎಲ್ಲೆಡೆ ಪ್ರಸಾರವಾಗಿ ಅದರ ಪ್ರಯೋಜನಗಳನ್ನು ಭಕ್ತರು ಪಡೆಯಲಿ ಎಂದು ಆಶೀರ್ವದಿಸಿದರು. ತ್ರಿಮೂರ್ತಿಗಳು ಮತ್ತು ಸಕಲ ದೇವಾನು ದೇವತೆಗಳ ಸಹಿತ ಈ ಮರದಲ್ಲಿ ನೆಲೆಸುವೆ ಎಂದು ಔದಂಭರ ವೃಕ್ಷಕ್ಕೆ ಭಗವಂತನು ವರಗಳನ್ನು ಕೊಟ್ಟನು.

ಔಷಧೀಯ ಗುಣಗಳು:

ಔದಂಬರ (ಫಿಕಸ್ ರೇಸೆಮೋಸಾ) ವಿವಿಧ ಔಷಧೀಯ ಪ್ರಯೋಜನಗಳನ್ನು ಹೊಂದಿದೆ, ವಿಶೇಷವಾಗಿ ಅದರ ಎಲೆಗಳು, ಇವುಗಳನ್ನು ಸಾಂಪ್ರದಾಯಿಕ ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತದೆ. ಈ ಎಲೆಗಳು ಜೀರ್ಣಕಾರಿ ಮತ್ತು ಗಾಯವನ್ನು ಗುಣಪಡಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಭೇದಿ, ಅತಿಸಾರ ಮತ್ತು ಉರಿಯೂತದ ಪರಿಸ್ಥಿತಿಗಳಂತಹ ವಿವಿಧ ಕಾಯಿಲೆಗಳಿಗೆ ಪರಿಹಾರಗಳಲ್ಲಿಯೂ ಬಳಸಲಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು, ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ತೊಗಟೆಯ ಕಷಾಯವನ್ನು ಗರ್ಭಾಶಯದ ರಕ್ತಸ್ರಾವ, ಗರ್ಭಪಾತ, ಲ್ಯುಕೋರಿಯಾ ಮತ್ತು ಯೋನಿ ರಕ್ತಸ್ರಾವವನ್ನು ಪರಿಹರಿಸಲು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.
ಆಯುರ್ವೇದ ಪರಿಹಾರಗಳಲ್ಲಿ ಔದಂಬರದ ತೊಗಟೆ ಮತ್ತು ಎಲೆಗಳನ್ನು ಬಳಸಲಾಗುತ್ತದೆ. ಎಲೆಗಳು ಮತ್ತು ತೊಗಟೆಯ ಕಷಾಯವನ್ನು ಸ್ಟೊಮಾಟಿಟಿಸ್ ಮತ್ತು ನೋಯುತ್ತಿರುವ ಗಂಟಲುಗಳಿಗೆ ಗಾರ್ಗಲ್ ಆಗಿ ಬಳಸಬಹುದು. ಚರ್ಮದ ಬಣ್ಣವನ್ನು ಸುಧಾರಿಸಲು ಕೋಮಲ ಎಲೆ ಮೊಗ್ಗುಗಳನ್ನು ಪೇಸ್ಟ್ ರೂಪದಲ್ಲಿ ಬಳಸಬಹುದು.

ತುಳಸಿ ಗಿಡ – ಲಕ್ಷ್ಮಿದೇವಿ

ತುಳಸಿ ಗಿಡ – Holy Basil (Ocimum tenuiflorum)

ಹಿಂದೂ ಸಂಪ್ರದಾಯದಲ್ಲಿ, ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ (ತುಳಸಿ ದೇವಿ ಎಂದೂ ಕರೆಯುತ್ತಾರೆ) ಐಹಿಕ ಅಭಿವ್ಯಕ್ತಿ ಎಂದು ಪೂಜಿಸಲಾಗುತ್ತದೆ ಮತ್ತು ಸಂಪತ್ತು , ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ಭೌತಿಕ ಸಾಕಾರವಾಗಿ ನೋಡಲಾಗುತ್ತದೆ. ಇದನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿಯ ಉಪಸ್ಥಿತಿಯು ನಕಾರಾತ್ಮಕ ಪ್ರಭಾವಗಳನ್ನು ನಿವಾರಿಸುತ್ತದೆ ಮತ್ತು ಕುಟುಂಬವನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ತುಳಸಿ ಸಸ್ಯದ ಪ್ರತಿಯೊಂದು ಭಾಗವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ, ಅದರ ಬೇರುಗಳು ತೀರ್ಥಯಾತ್ರೆಯನ್ನು ಪ್ರತಿನಿಧಿಸುತ್ತವೆ, ಶಾಖೆಗಳು ದೈವತ್ವವನ್ನು ಪ್ರತಿನಿಧಿಸುತ್ತವೆ ಮತ್ತು ಕಿರೀಟವು ಧರ್ಮಗ್ರಂಥಗಳ ತಿಳುವಳಿಕೆಯನ್ನು ಸಂಕೇತಿಸುತ್ತದೆ. ತುಳಸಿ ಸಸ್ಯವು ಸಾಮಾನ್ಯ ಸಸ್ಯವಲ್ಲ, ಇದನ್ನು ಭಾರತೀಯ ಮನೆಗಳಲ್ಲಿ “ಗಿಡಮೂಲಿಕೆಗಳ ರಾಣಿ” ಎಂದು ಕರೆಯಲಾಗುತ್ತದೆ. ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಪ್ರಭಾವಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ತುಳಸಿಯ ಆಧ್ಯಾತ್ಮಿಕ ಮಹತ್ವವು ಸಾವಿರಾರು ವರ್ಷಗಳ ಹಿಂದಿನದು, ಏಕೆಂದರೆ ಇದನ್ನು ಭಕ್ತಿ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ, ತುಳಸಿ ದೇವತೆಯ ಅವತಾರವೆಂದು ಪರಿಗಣಿಸಲಾಗಿದೆ. ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ತುಳಸಿ ಗಿಡದ ಎಲೆಗಳನ್ನು ಪೂಜೆಯಲ್ಲಿ, ವಿಶೇಷವಾಗಿ ವಿಷ್ಣು ಮತ್ತು ಕೃಷ್ಣನಿಗೆ ಸಂಬಂಧಿಸಿದ ಆಚರಣೆಗಳಲ್ಲಿ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಹತ್ವದ ಆಚರಣೆಯಾದ ತುಳಸಿ ವಿವಾಹವು ವಿಷ್ಣು ಮತ್ತು ತುಳಸಿ ದೇವಿಯ ನಡುವಿನ ಪವಿತ್ರ ವಿವಾಹವನ್ನು ಆಚರಿಸಲಾಗುತ್ತದೆ.

ಎಲ್ಲಾ ತುಳಸಿ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಶ್ಯಾಮ (ಕೃಷ್ಣ) ತುಳಸಿ ಮತ್ತು ವನ ತುಳಸಿಯನ್ನು ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ . ಅವುಗಳನ್ನು ಹೆಚ್ಚಾಗಿ ಔಷಧೀಯ ಉದ್ದೇಶಗಳಿಗಾಗಿ ಆದ್ಯತೆ ನೀಡಲಾಗುತ್ತದೆ. ನೇರಳೆ ಎಲೆಗಳು ಮತ್ತು ಗರಿಗರಿಯಾದ ರುಚಿಯನ್ನು ಹೊಂದಿರುವ ಶ್ಯಾಮ ತುಳಸಿ, ಗಂಟಲಿನ ಸೋಂಕುಗಳು, ಉಸಿರಾಟದ ಸಮಸ್ಯೆಗಳು ಮತ್ತು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ವನ ತುಳಸಿ, ಅಥವಾ ಕಾಡು ತುಳಸಿ, ಅದರ ಬಲವಾದ ಸುವಾಸನೆಗೆ ಹೆಸರುವಾಸಿಯಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಸಹಿಷ್ಣುತೆಯನ್ನು ಸುಧಾರಿಸುತ್ತದೆ

ಔಷಧೀಯ ಗುಣಗಳು:

ಹಸಿ ತುಳಸಿ ಎಲೆಗಳನ್ನು ತಿನ್ನುವುದರಿಂದ ವಿಟಮಿನ್-ಎ, ಸಿ ಮತ್ತು ಕೆ, ಹಾಗೂ ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಸಂಪೂರ್ಣ ಪೋಷಕಾಂಶಗಳ ಪ್ರೊಫೈಲ್ ಅನ್ನು ಒದಗಿಸುತ್ತದೆ. ತುಳಸಿ, ಗಂಟಲಿನ ಸೋಂಕುಗಳು, ಉಸಿರಾಟದ ಸಮಸ್ಯೆಗಳು ಮತ್ತು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ತುಳಸಿಯು ಯುಜೆನಾಲ್ ಮತ್ತು ಉರ್ಸೋಲಿಕ್ ಆಮ್ಲದಂತಹ ಸಂಯುಕ್ತಗಳನ್ನು ಹೊಂದಿದ್ದು, ಇದು ಅದರ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಗೆ ಕೊಡುಗೆ ನೀಡುತ್ತದೆ

ಬೇವಿನ ಮರ – ದುರ್ಗಾ ದೇವಿ

ಬೇವಿನ ಮರ – Neem Tree (Azadirachta indica)

ಹಿಂದೂ ಪುರಾಣಗಳಲ್ಲಿ ಬೇವಿನ ಮರವನ್ನು ದುರ್ಗಾ ದೇವಿಯ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ, ಸೀತಾಳ ದೇವತೆ (ಸಿಡುಬಿನ ದೇವತೆ) ಬೇವಿನ ಮರದಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಬೇವು ದುಷ್ಟಶಕ್ತಿಗಳು ಮತ್ತು ರೋಗಗಳ ವಿರುದ್ಧ ರಕ್ಷಣೆಗೆ ಸಂಬಂಧಿಸಿದೆ. ಬೇವಿನ ಮರವು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುವ ಶಕ್ತಿಯನ್ನು ಬೇವು ಹೊಂದಿರುವುದರಿಂದ ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದಂತಕಥೆಯ ಪ್ರಕಾರ, ಮಾನವಕುಲವು ದುಷ್ಟ ಶಕ್ತಿಗಳನ್ನು ಜಯಿಸಲು ಸಹಾಯ ಮಾಡಲು ಶಿವನು ಸ್ವತಃ ಬೇವಿನ ಮರವನ್ನು ಭೂಮಿಯ ಮೇಲೆ ನೆಟ್ಟನು. ಮರದ ಕಹಿ ರುಚಿ ಮತ್ತು ಕಟುವಾದ ವಾಸನೆಯು ನಕಾರಾತ್ಮಕ ಶಕ್ತಿಗಳನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಮತ್ತು ಕೆಲವು ಕಥೆಗಳ ಪ್ರಕಾರ, ಬೇವಿನ ಮರಗಳು ದೇವತೆಗಳು (ಆಕಾಶ ಜೀವಿಗಳು) ಭೂಮಿಯ ಮೇಲೆ ಸಿಂಪಡಿಸಿದ ಅಮೃತದ ಹನಿಗಳಿಂದ (ಅಮರತ್ವದ ಅಮೃತ) ಹುಟ್ಟಿಕೊಂಡಿವೆ ಎಂಬುದು ಸಾಮಾನ್ಯ ನಂಬಿಕೆ.

ಔಷಧೀಯ ಗುಣಗಳು:

ಬೇವಿನ ಮರವು ಆರೋಗ್ಯ ಮತ್ತು ಶುದ್ಧೀಕರಣದ ಸಂಕೇತವಾಗಿದ್ದು, ಅದರ ಎಲೆಗಳು ಮತ್ತು ತೊಗಟೆಯನ್ನು ವಿವಿಧ ಕಾಯಿಲೆಗಳಿಗೆ ಸಾಂಪ್ರದಾಯಿಕ ಆಯುರ್ವೇದ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ನಿವಾರಕ ಮತ್ತು (ಆಂಟಿವೈರಲ್) ಗುಣ ಲಕ್ಷಣಗಳನ್ನು ಹೊಂದಿದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. (ಆಂಟಿ-ಇನ್ಫ್ಲಮೇಟರಿ) ಬೇವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸಂಧಿವಾತ ದಂತಹ ಪರಿಸ್ಥಿತಿಗಳಿಗೆ ಉಪಯುಕ್ತವಾಗಿದೆ. (ಆಂಟಿಆಕ್ಸಿಡೆಂಟ್) ಬೇವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹುಣ್ಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುವದು, ರಿಂಗ್‌ವರ್ಮ್ ಮತ್ತು ಮೊಡವೆಗಳಂತಹ ಚರ್ಮದ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬೇವನ್ನು ಬಳಸಬಹುದು ಮತ್ತು ಇದನ್ನು ಚರ್ಮವನ್ನು ಮೃದುಗೊಳಿಸುವ ಸಾಧನವಾಗಿಯೂ ಬಳಸಲಾಗುತ್ತದೆ.

ಕದಂಬ ಮರ – ಲಕ್ಷ್ಮಿ , ವಿಷ್ಣು

ಕದಂಬ ಮರ – Kadamba Tree (Neolamarckia cadamba)

ಕದಂಬ ಮರಗಳನ್ನು ಅನೇಕ ಹಿಂದೂ ಸಂಪ್ರದಾಯಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಕೆಲವು ದೇವಾಲಯಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಸ್ಥಳ ವೃಕ್ಷ (ದೇವಾಲಯ ಮರಗಳು) ಎಂದು ಹೆಚ್ಚಾಗಿ ನೋಡಲಾಗುತ್ತದೆ. ಲಕ್ಷ್ಮಿ ಕದಂಬ ಮರದ ಮೇಲೆ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಕದಂಬ ಮರದ ಕೆಳಗೆ ಕುಳಿತು ಯಜ್ಞ ಮಾಡುವ ಮೂಲಕ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ ಮತ್ತು ಕುಟುಂಬದಲ್ಲಿ ಸಂತೋಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಮತ್ತು ಶ್ರೀಕೃಷ್ಣನ ನೆಚ್ಚಿನ ಮರವೆಂದು ಪೂಜಿಸಲಾಗುತ್ತದೆ, ವಿಶೇಷವಾಗಿ ರಾಧೆಯ ಮೇಲಿನ ಪ್ರೀತಿಗೆ ಸಂಬಂಧಿಸಿದೆ. ವೃಂದಾವನದಲ್ಲಿ ಅದರ ಛಾವಣಿಯ ಕೆಳಗೆ ಕೃಷ್ಣನು ತನ್ನ ಸ್ನೇಹಿತರು ಮತ್ತು ರಾಧೆಯೊಂದಿಗೆ ಸೇರುತ್ತಿದ್ದನು, ಅದರ ನೆರಳು ಮತ್ತು ಪರಿಮಳಯುಕ್ತ ಹೂವುಗಳನ್ನು ಆನಂದಿಸುತ್ತಿದ್ದನು ಎಂದು ನಂಬಲಾಗಿದೆ. ಕೃಷ್ಣನೊಂದಿಗಿನ ಸಂಬಂಧದಿಂದಾಗಿ ಈ ಮರವನ್ನು “ಹರಿಪ್ರಿಯಾ” (ಭಗವಂತನ ನೆಚ್ಚಿನ) ಎಂದೂ ಕರೆಯಲಾಗುತ್ತದೆ. ಕದಂಬ ಮರವನ್ನು ದೈವಿಕ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿ ನೋಡಲಾಗುತ್ತದೆ, ಈ ಮರವು ಮಧುರೈ ನಗರಕ್ಕೂ ಸಂಬಂಧಿಸಿದೆ, ಅಲ್ಲಿ ಇದು ಒಂದು ಕಾಲದಲ್ಲಿ ಪ್ರಬಲ ಲಕ್ಷಣವಾಗಿತ್ತು ಮತ್ತು ನಗರವನ್ನು “ಕದಂಬವನಂ” (ಕದಂಬರ ಅರಣ್ಯ) ಎಂದು ಕರೆಯಲಾಗುತ್ತಿತ್ತು.

ಔಷಧೀಯ ಗುಣಗಳು:

ಕದಂಬ ಮರಗಳನ್ನು ಸಾಮಾನ್ಯವಾಗಿ ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ, ಕದಂಬ ಮರವು ಅಸಾಮಾನ್ಯ ಮತ್ತು ಔಷಧೀಯ ಉದ್ದೇಶಗಳಿಗಾಗಿ ಅಸಾಧಾರಣವಾಗಿ ಉಪಯುಕ್ತವಾಗಿದೆ. ಅದು ಯಾವುದೇ ನೋವು ಮತ್ತು ಉರಿಯೂತವನ್ನು ಶಮನಗೊಳಿಸುತ್ತದೆ. ಗಾಯ ಗುಣಪಡಿಸುವಲ್ಲಿ ಕೂಡ ಸಾಹಯಕಾರಿ, ಈ ಮರದ ತೊಗಟೆಯು ವ್ಯಕ್ತಿಯನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸಿತ್ತದೆ. ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅನೇಕ ಅಧ್ಯಯನಗಳ ಪ್ರಕಾರ ಕದಂಬ ಮರದ ಎಲೆಗಳು, ತೊಗಟೆ ಮತ್ತು ಬೇರುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿ. ಈ ಮರದ ಎಲೆಗಳು ಮೆಥನಾಲಿಕ್ ಸಾರವನ್ನು ಹೊಂದಿವೆ. ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಕೊಬ್ಬಿನ ಮಟ್ಟವನ್ನು ಮಧ್ಯಮಗೊಳಿಸುತ್ತದೆ .

Leave a Comment

Your email address will not be published. Required fields are marked *

en_USEN
Scroll to Top