
ಗಣೇಶನ ಸೊಂಡಿಲು! ಇದು ಹೇಗೆ ಅವರ ವಿಶೇಷ ಗುರುತು ಮತ್ತು ಸೊಂಡಿಲಿನ ಹಿಂದಿನ ಆಧ್ಯಾತ್ಮಿಕ ಮತ್ತು ದೈವಿಕ ಅರ್ಥವನ್ನು ತಿಳಿಯೋಣ.
ಪ್ರಥಮ ವಂದ್ಯನಾದ ಗಣಪತಿಯನ್ನೂ ನಾನಾ ರೀತಿಯಲ್ಲಿ ಪೂಜಿಸುವುದುಂಟು, ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ.
ಆನೆಯ ಮುಖ (ಗಜವದನ), ಮೊರದಂತಹ ಕಿವಿಗಳು (ಶೂರ್ಪಕರ್ಣ ), ಎಡಕ್ಕೆ ಅಥಾವ ಬಲಕ್ಕೆ ಭಾಗಿದ ಸೊಂಡಿಲು ( ಶುಂಡಾಲ), ಏಕದಂತ(ದಂತಿಮುಖ), ದೊಡ್ಡ ಹೊಟ್ಟೆ (ಲಂಬೋದರ), ಮೂರು ಕೈಗಳಲ್ಲಿ ಪಾಶ, ಅಂಕುಶ ಮತ್ತು ಮೋದಕ, ನಾಲ್ಕನೆಯ ಕೈ ಭಕ್ತನಿಗೆ ಅಭಯ ಹಸ್ತ ಸೂಚಿಸುತ್ತದೆ (ಚತುರ್ಭುಜ), ಕೆಂಪುಬಣ್ಣದ ಸುಂದರ ದೇಹ; ಇದೇ ಗಣೇಶನ ಆಕೃತಿ.
ಗಣಪತಿಯ ದೊಡ್ಡ “ತಲೆ” ಅವನು ಮಹಾ ಬುದ್ಧಿಶಾಲಿ ಎಂಬುದನ್ನು ಸೂಚಿಸುತ್ತದೆ.
ಗಣಪತಿಯ “ಕಿವಿಗಳು” ಮೊರಗಳಂತೆ ಅಗಲವಾಗಿವೆ. ಮೊರದಲ್ಲಿ ಧಾನ್ಯವನ್ನು ಕೇರುತ್ತಾರೆ, ಇದರಿಂದ ಹೊಟ್ಟು, ಕಾಳು ಬೇರೆ ಬೇರೆ ಆಗುತ್ತವೆ. ಹಾಗೆಯೇ ಗಣೇಶನು ಸತ್ಯವನ್ನೂ ಸುಳ್ಳನ್ನು ಬೇರೆ ಬೇರೆ ಮಾಡುತ್ತಾನೆ. ಈ ಅಗಲವಾದ ಕಿವಿಗಳು ಭಕ್ತರ ಪ್ರಾರ್ಥನೆಗಳನ್ನು ಗಮನವಿಟ್ಟು ಕೇಳುತ್ತಾನೆ ಎಂಬುದನ್ನು ತೋರಿಸುತ್ತವೆ.
ಯಾವಾಗಲೂ ಆಡುವ ಅವನ “ಸೊಂಡಿಲು” ಸದಾ ಕ್ರಿಯಾಶೀಲನಾಗಿರು ಎಂದು ಬೋಧಿಸಿತ್ತದೆ, ಮತ್ತು ಬುದ್ಧಿಯ, ಶಕ್ತಿಯ, ಹಾಗು ಸಮತೋಲನದ ಸಂಕೇತವಾಗಿದೆ.
“ಏಕದಂತ” ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ಸೂಚಿಸುತ್ತದೆ.
ಗಣೇಶನಿಗೆ ನಾಲ್ಕು ಕೈಗಳಿವೆ. (ಚತುರ್ಭುಜ)
ಅವನ ಬಲ ಭಾಗದ ಎರಡು ಕೈಗಳಲ್ಲಿ ಒಂದರಲ್ಲಿ ಪಾಶವಿದೆ. ಇದು ಮಹಿಮೆಯಿಂದ ಕೂಡಿದ ಪಾಶ. ಗಣೇಶ ಇದರ ಸಹಾಯದಿಂದ ತನ್ನ ಭಕ್ತರ ಮನಸ್ಸನ್ನು ಆಕರ್ಷಿಸುತ್ತಾನೆ. ಇನ್ನೊಂದು ವರದಹಸ್ತ. ಇದು ಗಣೇಶನನ್ನು ಮೊರೆ ಹೊಕ್ಕವರಿಗೆ ಭಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಗಣೇಶನ ಮೇಲ್ ಮುಖವಾಗಿರುವ ಕೈ ಅಭಯಹಸ್ತದ ಸಂಕೇತವಾಗಿದ್ದು, ‘ಹೆದರದಿರು, ನಾನು ನಿನ್ನ ಜೊತೆಗಿದ್ದೇನೆ’ ಎಂದು ಅರ್ಥ ನೀಡುತ್ತದೆ.
ಎಡಭಾಗದ ಎರಡು ಕೈಗಳಲ್ಲಿ ಒಂದು ಅಂಕುಶವನ್ನು ಹಿಡಿದಿದೆ. ಇದು ನಮ್ಮ ಅಜ್ಞಾನವನ್ನು ನಿವಾರಿಸುವ ಸಂಕೇತ. ಮತ್ತೊಂದು ಕೈಯಲ್ಲಿ ಮೋದಕಗಳಿಂದ ತುಂಬಿದ ಪಾತ್ರೆಯಿದೆ. ಇದು ಗಣೇಶನು ಎಲ್ಲರಿಗೂ ಸಂತೋಷವನ್ನು ಕೊಡುತ್ತಾನೆ ಎಂದು ತೋರಿಸುತ್ತದೆ. ಮತ್ತು ಅವನ ಹೊರಮುಖವಾಗಿರುವ ಕೆಳಗಿನ ಕೈಯು ನಿರಂತರವಾದ ಕೊಡುಗೆಯ ಸಂಕೇತ ಮತ್ತು ಶಿರ ಬಾಗಿಸಲು ಆಹ್ವಾನ ಕೂಡ.
ಗಣೇಶನ “ದೊಡ್ಡ ಹೊಟ್ಟೆಯು” ಔದಾರ್ಯವನ್ನು ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತವೆ. ಹೊಟ್ಟೆಯು ಇಡೀ ಬ್ರಹ್ಮಾಂಡವೇ ಗಣಪತಿಯಲ್ಲಿ ಅಡಗಿದೆ ಎಂಬ ಅರ್ಥವನ್ನು ಕೊಡುತ್ತದೆ.
ಗಣೇಶನು ಶ್ರೀ ಸಿದ್ದಿ ವಿನಾಯಕನು, ಬುದ್ಧಿ ಪ್ರಧಾಯಕನು, ವಿಘ್ನ ವಿನಾಶಕನು, ಆಧಿ ಪೂಜಿತನು ಆದ ಗಣೇಶನು ಗಣಗಳಿಗೆ ಅಧಿಪತಿಯು ಇಂತಹ ಗಣೇಶನ ಸೊಂಡಿಲಿನ ಹಿಂದಿರುವ ವಿಶೇಷ ವಿಷಯಗಳು ಜನರ ಜೀವನದ ಸಮಸ್ಯೆ ದೂರ ಮಾಡುವಲ್ಲಿ ಬಹಳ ಸಹಾಯ ಮಾಡುತ್ತದೆ. ಇಂತಹ ಸೊಂಡಿಲು ಗಣಪತಿಗೆ ಬರುವುದರ ಹಿಂದೆ ತುಂಬ ದೊಡ್ಡ ಕಥೆಯೇ ಇದೆ. ಆ ಗೌರಿಸುತ ಗಣೇಶನಿಗೆ ಸೊಂಡಿಲು ಹೇಗೆ ಬಂತು ಎಂಬುದು ಪುರಾಣ ಕಥೆಗಳ ಮೂಲಕ, ಗ್ರಂಥ ಪುಸ್ತಕಗಳ ಮೂಲಕ, ನಾಟಕ, ಸಿನಿಮಾಗಳ ಮೂಲಕ ನಾವೆಲ್ಲರು ತಿಳಿದಿರುತ್ತೆವೆ. ಆದರೇ ಆ ಸೊಂಡಿಲಿನ ಹಿಂದಿರುವ ಮಹತ್ವ, ವಿಶೇಷತೆಗಳನ್ನು ತಿಳಿದಿರುವುದಿಲ್ಲ. ಅದರ ಬಗೆಗಿನ ಮಾಹಿತಿ, ಒಂದು ಕಿರುನೋಟ ಇಲ್ಲಿದೆ.
ಗಣಪತಿಯು ಗಣಗಳಗೆ ಅಧಿಪತಿಯು ಆದ ಅವರು ಎಲ್ಲಾ ಅಡೆತಡೆಗಳನ್ನು ನಿವಾರಿಸುವವರು, ಗಣೇಶನ ಸೊಂಡಿಲು ಬ್ರಹ್ಮಾಂಡದ ಧ್ವನಿಯಾದ “ಓಂ“ನ ಒಂದು ಭಾಗವನ್ನು ಪ್ರತಿನಿಧಿಸುತ್ತದೆ.
ಗಣೇಶನ ಸೊಂಡಿಲು ಕೇವಲ ಶೈಲಿಯಲ್ಲ, ಅದು ಬುದ್ಧಿಯ, ಶಕ್ತಿಯ, ಮತ್ತು ಸಮತೋಲನದ ಸಂಕೇತವಾಗಿದೆ.
1️⃣ ಬುದ್ಧಿಯ ಅಗತ್ಯತೆ. ಮತ್ತು 2️⃣ ಶಕ್ತಿ ಮತ್ತು ಸಮತೋಲನ.
ನಮ್ಮ ಜೀವನದಲ್ಲಿ ಅಡಚಣೆಗಳನ್ನು ದೂರ ಮಾಡುವಲ್ಲಿ ಬುದ್ಧಿ ಮತ್ತು ಶಕ್ತಿಯು ಎಷ್ಟು ಮುಖ್ಯವೆಂದು ಗಣೇಶನ ಸೊಂಡಿಲು ನಮಗೆ ತೋರಿಸುತ್ತದೆ. ಗಣೇಶನ ಸೊಂಡಿಲು ಬುದ್ಧಿಯ ಮತ್ತು ನೆನಪಿನ ಶಕ್ತಿಯ ಸಂಕೇತವಾಗಿದೆ. ಈ ಶಕ್ತಿಯು ತಿಳಿವಳಿಕೆ ಮತ್ತು ತಿಳುವಳಿಕೆಯನ್ನು ಸಂಪಾದಿಸಲು ನಮಗೆ ಮಾರ್ಗಸೂಚಿಯಾಗಿದೆ. ಬುದ್ಧಿ ಹಾಗೂ ತಿಳುವಳಿಕೆಗಳ ಮೂಲಕ, ನಾವು ಜೀವನದ ಅಡಚಣೆಗಳನ್ನು ಹೇಗೆ ಮುರಿಯಬಹುದು ಎಂದು ತಿಳಿಸಿಕೊಡುತ್ತದೆ.
3️⃣ ಅಡೆತಡೆಗಳನ್ನು ನಿಭಾಯಿಸುವ ಸಾಮರ್ಥ್ಯ.
ಅಡೆತಡೆಗಳನ್ನು ದಾಟುವ ಶಕ್ತಿಯನ್ನು ನೀಡುತ್ತದೆ. ಆನೆಗೆ ತನ್ನ ಸೊಂಡಿಲು ಯಾವ ಅಡೆತಡೆಯನ್ನಾದರೂ ಮುರಿಯಲು ಸಹಾಯ ಮಾಡುತ್ತದೆಯೋ, ಹಾಗೆಯೇ ನಮ್ಮ ಜೀವನದ ತೊಂದರೆಗಳನ್ನು ದೂರ ಮಾಡುವುದು ವಿಘ್ನಹರ್ತ ಗಣೇಶನ ವೈಶಿಷ್ಟ್ಯ.
ಎಡಭಾಗಕ್ಕೆ ಭಾಗಿರುವ ಸೊಂಡಿಲಿರುವ ಗಣಪತಿಯನ್ನು ಎಡಮುರಿ ಗಣಪ ಎಂದು ಮತ್ತು ಬಲಭಾಗಕ್ಕೆ ಭಾಗಿರುವ ಸೊಂಡಿಲಿರುವ ಗಣಪತಿಯನ್ನು ಬಲಮುರಿ ಗಣಪ ಎಂದು ಹಾಗು ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು.
ಬಲಮುರಿ ಗಣಪ.
ಬಲಭಾಗದ ಸೊಂಡಿಲು ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ. ಮತ್ತು ಎಲ್ಲಾ ಲೌಕಿಕ ಸುಖಗಳಿಂದ ಮುಕ್ತಿ ಮತ್ತು ಮೋಕ್ಷವನ್ನು ಸಾಧಿಸುತ್ತದೆ. ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ.
ಎಡಮುರಿ ಗಣಪ.
ಎಡಭಾಗದ ಸೊಂಡಿಲು ಶ್ರೇಯಸ್ಸು, ಸಮೃದ್ಧಿ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಎಡಕ್ಕೆ ತಿರುಗಿರುವ ವಾಮಮುಖಿ ಮೂರ್ತಿಯನ್ನು ಎಡಮುರಿ ಗಣಪತಿಯೆಂದು ಕರೆಯಲಾಗುತ್ತದೆ.
ಎಡಮುರಿ ಗಣಪತಿಯು ಶಾಂತ ಹಾಗೂ ಆನಂದತೆಯನ್ನು ಸೂಚಿಸುವುದರಿಂದ ಮನೆಗಳಲ್ಲಿ ಪೂಜಿಸಲು ಎಡಮುರಿ(ಎಡಭಾಗಕ್ಕೆ ಸೊಂಡಿಲಿರುವ) ಗಣೇಶನೇ ಶ್ರೇಷ್ಟ ಎಂದು ಹೇಳಲಾಗುತ್ತದೆ. ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ.
ಗಣೇಶನ ಸೊಂಡಿಲು ಪೌರಾಣಿಕ ಕಥೆಗಳಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಮಹಾಭಾರತ ಬರೆಯುವಾಗ, ಅವರ ದಂತ ಮಾತ್ರವಲ್ಲ, ಅವರ ಸೊಂಡಿಲಿನ ಶಕ್ತಿಯು ಸಹ ಬಿಂಬಿತವಾಗಿದೆ.
ಮೋದಕ ಪ್ರಿಯನಾದ ವಿನಾಯಕನಿಗೆ ಪೂಜೆಯ ಸಂದರ್ಭದಲ್ಲಿ ನೈವೇದ್ಯವನ್ನು ಸೊಂಡಿಲಿನ ಬಳಿಯಲ್ಲಿ ಇಡಲಾಗುತ್ತದೆ. ಇದು ಶ್ರೇಯಸ್ಸು, ಸಮೃದ್ಧಿ ಮತ್ತು ಶಾಂತಿಯನ್ನು ತರುವುದರ ಜೋತೆಗೆ ಶ್ರೀ ಸಿದ್ದಿವಿನಾಯಕನ ಆಶೀರ್ವಾದವು ದೊರೆಯುತ್ತದೆ.
ಗಣೇಶನ ಸೊಂಡಿಲು ನಮಗೆ ಮೂರು ಪ್ರಮುಖ ಪಾಠಗಳನ್ನು ಕಲಿಸುತ್ತದೆ:
1️⃣ ಬುದ್ಧಿಯ ಅಗತ್ಯತೆ
2️⃣ ಶಕ್ತಿ ಮತ್ತು ಸಮತೋಲನ
3️⃣ ಅಡೆತಡೆಗಳನ್ನು ನಿಭಾಯಿಸುವ ಸಾಮರ್ಥ್ಯ
ಈ ಪಾಠಗಳನ್ನು ಜೀವನದಲ್ಲಿ ಅನುಸರಿಸಿ, ನಾವು ಯಾವುದೇ ಸಮಸ್ಯೆಗಳಿಗೆ ದಿಟ್ಟವಾಗಿ ನಿಲ್ಲಬಹುದು. ಮತ್ತು ನಮ್ಮ”ಗುರಿ” ಕಡೆಗೆ ಇಡುವ ಸಣ್ಣ ಹೆಜ್ಜೆಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ.
“ಧನ್ಯವಾದಗಳು“
Wonderful and useful story, keep posting this useful information in Kannada